Thursday, January 28, 2010

ಒಲವಿನ ಓಲೆ

Hello, ಒಂದು ನಿಮಿಷ ಕೇಳು ನಾನು ಎಷ್ಟೊ ತಿಂಗಳುಗಳಿಂದ ನನ್ನ ಪ್ರೀತಿನಾ ನಿನ್ನ ಮುಂದೆ ವ್ಯಕ್ತ ಪಡಿಸುವುದಕ್ಕೆ ಆಗದೆ ನಾನು ನನ್ನ ಆಸೆಗಳನ್ನ,ಭಾವನೆಗಳನ್ನ,ಕಲ್ಪನೆಗಳನ್ನ ಮತ್ತು ಕನಸುಗಳನ್ನೆಲ್ಲಾ ನನ್ನ ಎದೆಯಲ್ಲೆ ಮುಚ್ಚಿಟ್ಟುಕೊಂಡಿದ್ದೆ ಇವತ್ತು ಅ ನನ್ನ ಹುಚ್ಚು ಕಲ್ಪನೆಗಳೆಂಬ ತುಂಬು ಗರ್ಭಿಣಿಗೆ ಹೆರಿಗೆ ಸಮಯ ಆ ನೋವನ್ನ ತಡಿಲಾರದೆ ಆ ನನ್ನ ಆಸೆ ಮತ್ತು ಕಲ್ಪನೆಗಳನ್ನೆಲ್ಲಾ ನನ್ನ ಹೃದಯಾನೆ ಒಂದು ಖಾಲಿ ಹಾಳೆಯಾನ್ನಾಗಿ ಮಾಡಿಕೊಂಡು ನಿನಗೆ ಒಂದು ಚಿಕ್ಕ ಓಲೆಯನ್ನಾ ಬರೆದು ನಿನ್ನ ಮುಂದಿಡ್ತಾ ಇದ್ದಿನೀ.

ನಾವಿಬ್ಬರು ಸುಮಾರು ವರ್ಷಗಳಿಂದ ಒಬ್ಬರಿಗೊಬ್ಬರು ಪರಿಚಯ ಇದ್ದಿವಿ ಒಟ್ಟಿಗೆ ಇಂಜಿನಿಯರಿಂಗ್ ಮಾಡಿದ್ವಿ ಮತ್ತೆ ಒಂದೆ ಕಂಪನಿಯಲ್ಲೆ ಕೆಲಸನು ಮಾಡ್ತಾ ಇದ್ವಿ ಆದರೆ ನಮ್ಮಿಬ್ಬರ ನಡುವೆ ಅಷ್ಟೊಂದು ಮಾತು ಇರಲಿಲ್ಲ ಖಾಲಿ ಒಂದು Cute smile ಅಷ್ಟೆ. ಮೊದಲು ಮೊದಲು ನಿನ್ನನ್ನ ನೊಡಿದರೆ ನನ್ನಲ್ಲಿ ಯಾವದೆ ತರಹದ ಭಾವನೆಗಳಾಗಲಿ ಕಲ್ಪನೆಗಳಾಗಲಿ ಮೂಡುತ್ತ ಇರಲಿಲ್ಲ ಆದರೆ ಇತ್ತೀಚಿಗೆ ಯಾಕೋ ನಿನ್ನನ್ನ ನೋಡಿದಾಗ "ಏನೋ ಓಂತಾರ....." ನನ್ನ ಈ ಪುಟ್ಟ ಹೃದಯದಲ್ಲಿ ಭಾವನೆಗಳ ಸುನಾಮಿನೆ ಬಂದ ಹಾಗೆ ಆಗುತ್ತೆ. ಹುಂ ಏನು ಹೇಳಬೇಕೊ ಒಂದು ತಿಳಿತಾ ಇಲ್ಲ ಕಣೇ something like ನನ್ನ ಮನಸ್ಸಿನಲ್ಲಿ kuch kuch hota hai.

ನಾವು ಕೆಲಸಕ್ಕೆ ಹೊಗುವ ಕಂಪನಿಗೆ ಮೆಜೆಸ್ಟಿಕ್ ನಿಂದ ಬಸ್ ಅನ್ನು ಪಿಕಪ್ ಮಾಡಬೇಕಿತ್ತು. ನಮ್ಮಿಬ್ಬರದು ಒಂದೆ ಶಿಫ್ಟ್ ಆಗಿದ್ದರಿಂದ ದಿನಾನು ಒಂದೆ ಸಮಯಕ್ಕೆ ಬಂದು ಬಸ್ ಅನ್ನು ಕಾಯ್ತ ಇದ್ವಿ.ಬಸ್ ಅನ್ನು ಪಿಕಪ್ ಮಾಡುವುದಕ್ಕೆ ಅಂತ ಬಸ್ ಸ್ಟ್ಯಾಂಡ್ ಗೆ ಬಂದಾಗ ನನ್ನ ಕಣ್ಣುಗಳು ನನಗೆ ತಿಳಿಸದೇನೆ ಮೊದಲು ನಿನ್ನನ್ನ ಹುಡುಕುತ್ತಿದ್ದವು ಆ ಸಮಯದಲ್ಲೆನಾದರು ನೀನು ನನ್ನ ಕಣ್ಣಿಗೆ ತಕ್ಷಣ ಕಾಣಾದೆ ಹೋದರೆ ನನ್ನ ಮನಸ್ಸು ಛೆ ಇವತ್ತು ನಾನು ಅವಳನ್ನ ಮಿಸ್ ಮಾಡ್ಕೊಂಡ್ ಬಿಟ್ಟೆ ಅವಳು ಆಫಿಸ್ ಗೆ ಬರೋದಿಲ್ಲವೇನೊ ಅಂತ ತಳಮಳಗೊಳ್ಳುತಿತ್ತು. ನೀನು ಕಂಡೆ ಅಂತ ಅಂದರೆ ನನ್ನ ಮನಸ್ಸು ಸಂತೋಷದಿಂದ ಕುಣಿಯೋಕೆ ಶುರು ಮಾಡ್ತಾ ಇತ್ತು. ಏಷ್ಟೊ ಬಾರಿ ಆ ಸಮಯದಲ್ಲಿ ನಾನು ನಿನ್ನ ಹತ್ತಿರ ಬಂದು ಮಾತಾನಾಡಬೇಕು ಅಂತ ಹಂಬಲಿಸುತ್ತಿದ್ದೆ ಆದರೆ ನೀನು ಮಾತ್ರ ನಿನ್ನ ಗೆಳತಿಯರೋಂದಿಗೆ ಮಾತಾನಡುವುದರಲ್ಲಿ ತಲ್ಲೀನಾಳಾಗಿ ಬಿಡುತ್ತಿದ್ದೆ.

ಆಫಿಸ್ ನಲ್ಲು ಅಷ್ಟೆ ನಾವು Friends ಏಲ್ಲಾ ಸೇರಿ ಒಟ್ಟಿಗೆ ಟೀ ಕುಡಿಯೋಕೆ ಅಂತ ಹೊಗ್ತಾ ಇದ್ವಿ. ಆ ಸಮಯದಲ್ಲು ಅಷ್ಟೆ ನೀನು ನೀನ್ನ ಗೆಳೆತಿಯರೊಂದಿಗೆ ಅಷ್ಟೆ ಮಾತಾನಾಡ್ತಾ ಇದ್ದೆ. ಹಾಗೆ ನಿನ್ನ ಗೆಳೆತಿಯರೊಂದಿಗೆ ಮಾತಾನಾಡ್ತ ಮಾತಾನಾಡ್ತ ನನ್ನನ್ನು ಮಾತಾನಾಡಿಸುತ್ತಿಯೆನೋ ಅಂತ ಕಾಯ್ತ ಇದ್ದೆ ಆದರೆ ನೀನು ಮಾತ್ರ ಹಾಗೆ ಸುಮ್ಮನೆ ಇದ್ದು ಬಿಡ್ತ ಇದ್ದೆ. ಯಾಕೆಂದರೆ ನೀನು ಯಾವ ಹುಡುಗರ ಬಳಿಯು ಹೆಚ್ಚು ಮಾತಾನಾಡ್ತಾ ಇರಲಿಲ್ಲ ಅದಕ್ಕೆ ಅಲ್ವೆನೆ.ಹಾಗೆ ನೀನು ಸುಮ್ಮನೆ ಆಗಿದ್ದಾಗ ನನ್ನ ಮನಸ್ಸು ಮಾತಾನಾಡಿಸೋ ಅವಳನ್ನ ಅಂತ ಹೇಳ್ತಾಇತ್ತು. ಆದರೆ ನನಗೆ ಬೇರೆ ಹುಡುಗಿಯರನ್ನ ಮಾತಾನಾಡಿಸುವಗಾ ಭಯ ಇಲ್ಲದೆ ನಿಸ್ಸಂಕೋಚದಿಂದಮಾತನಾಡ್ತ ಇದ್ದೆ ಆದರೆ ನಿನ್ನ ಹತ್ತಿರ ಮಾತನಾಡೋಕೆ ಏನೋ ಮುಜುಗರ ಆಗ್ತಾ ಇತ್ತು ಯಾಕೆ ಅಂತ ಗೊತ್ತಿಲ್ಲ.

ನಿಜ ಹೇಳಲಾ ನೀನು ಎದುರುಗಡೆ ಸಿಕ್ಕಾಗ ಆ ಒಂದು cute smile ಕೊಡ್ತಿಯಲ್ಲಾ ಆ smileಗೆ ನಾನು ಕ್ಲಿನ್ BOLD ಆಗಿಬಿಟ್ಟಿದ್ದಿನಿ ಕಣೇ.

ನಾನು ಒಂಟಿಯಾಗಿದ್ದಾಗಂತು ನೀನು ನನಗೆ ಎಷ್ಟು ಕಾಡ್ತಿಯಾ ಗೊತ್ತ ಅದರಿಂದ ನಾನು ತಪ್ಪಿಸಿಕೊಳ್ಳೋಕೆ ಅಂತ ಒಂದು ಕ್ಷಣ ನಾನು ಕಣ್ಣು ಮುಚ್ಹಿದರೆ ನನ್ನ ಮನಸ್ಸಿನಲ್ಲೆ ನಿನ್ನ ಪ್ರತಿಬಿಂಬ ಮೂಡುತ್ತೆ ಕಣ್ಣು ಬಿಟ್ಟೆ ಅಂದರೆ ಕಣ್ಣ ಮುಂದೆ ಬಂದು ನಿಂತ ಹಾಗೆ ಆಗುತ್ತೆ ಕಣೆ.Total ಆಗಿ ಹೇಳಬೆಕು ಅಂತ ಅಂದರೆ "ಕನಸಲು ನೀನೆ ಮನಸಲು ನೀನೆ"

ಇಬ್ಬರಿಗೂ ಒಬ್ಬರದೊಬ್ಬರ ಮೊಬ್ಯೆಲ್ ನಂಬರ್ ಗೊತ್ತಿದ್ದರು ಇಷ್ಟು ವರ್ಷದಲ್ಲಿ ಒಂದು ಸಾರಿನು ಅದರ ಮುಖಾಂತರ ಸಂಭಾಷಣೆ ನಡೆದಿದ್ದಿಲ್ಲ. ನನಗೂ ಸಹ ಭಯ ಇತ್ತು. ಹೇಗಪ್ಪ ಇವಳ ಹತ್ತಿರ ಮೊಬ್ಯೆಲ್ ಮೂಲಕ ಮಾತಾನಾಡಿಸುದು ಮತ್ತೆ ಹೇಗಪ್ಪ ಇವಳಿಗೆ SMS ಕಳಿಸುವುದು ಅಂತ ಯಾಕೆಂದರೆ ನೀನು ಎದುರುಗಡೆ ಸಿಕ್ಕಾಗೆ ಹೆಚ್ಚು ಮಾತಾನಾಡುತ್ತಾ ಇರಲಿಲ್ಲವಲ್ಲ ಅದಕ್ಕೆ. ಅದರೆ ಒಂದು ದಿನ ಬೆಳಗ್ಗೆ ನಾನು ಮೆಜೆಸ್ಟಿಕ್ ಗೆ ನವರಂಗ್ ನಿಂದ ಬರೋದು ಲೇಟ್ ಆಯ್ತು ಆಗ ನೀನು ಎಲ್ಲಿದ್ದಿಯ ಬೇಗ ಬಾ ಬಸ್ ಹೋರಟು ನಿಂತಿದೆ ಅಂತ SMS ಮಾಡಿದ್ದೆ ಗೋತ್ತಾ ಆ SMS ನ ಈವಾಗಲು ನಾನು ನನ್ನ ಮೊಬ್ಯೆಲ್ ನ draft ನಲ್ಲಿ save ಮಾಡಿ ಇಟ್ಟುಕೊಂಡಿದ್ದಿನಿ ಗೋತ್ತಾ. ಆ ದಿವಸ ನಾನು ಕಂಪನಿಯಲ್ಲಿ ಸರಿಯಾಗಿ ಕೆಲಸ ಮಾಡ್ಲಿಲ್ಲ ಮತ್ತೆ ರಾತ್ರಿ ಸರಿಯಾಗಿ ನಿದ್ದೇನೆ ಬರಲಿಲ್ಲ ಗೊತ್ತಾ. ನೀನು ಕಳಿಸಿರೊ SMS ನಾ ಸುಮ್ನೆ ಮೇಲಿನಿಂದ ಕೆಳಗೆ ಕೆಳಗಿನಿಂದ ಮೇಲಿ ಪುನಃ ಪುನಃ ಹೊದುತ್ತಾ ಕುಳಿತಿದ್ದೆ ಕಣೆ. ನೀನು ಕಳಿಸಿರೋ ಆ SMS ನಲ್ಲಿ ನನ್ನ ಮೇಲೆ ನಿನಗೆ ಕರುಣೆ ಇತ್ತು ಅನುಕಂಪ ಇತ್ತು ಅಲ್ವೇನೆ, ಅದೆನಾದರು ಸ್ವಲ್ಪ ಜಾಸ್ತಿ ಆದರೆ ಹುಟ್ಟೊದೆ ಆ ಏರಡು ಅಕ್ಷರದ ಪ್ರೀತಿ ಕಣೆ ಅದು ಈಗ ನಿನ್ನ ಮೇಲೆ ನನಗೆ ಹುಟ್ಟಿದೆ ಕಣೆ. ಒಂದು ಮಾತು ಹೇಳ್ತಿನಿ ಕೇಳು ಬೇರೆಯವರಿಗೆ ಈ ಪ್ರಪಂಚದಲ್ಲಿ ನೀನು ಒಬ್ಬಳು ಹುಡುಗಿ ಆದರೆ ನನಗೆ ಈ ಪ್ರಪಂಚನೆ ನೀನು ಕಣೆ ಗೊತ್ತಾ.ನೋಡು ಆ ಬ್ರಹ್ಮ ನನ್ನ ಹಣೆಯಲ್ಲಿ ನಿನ್ನ ಹೆಸರನ್ನ ಬರೆದಿರುವನೊ ಇಲ್ಲವೊ ಗೊತ್ತಿಲ್ಲ ಆದರೆ ನಾನು ಮಾತ್ರ ನನ್ನ ಎದೆಯಲ್ಲಿ ನಿನ್ನ ಹೆಸರನ್ನ ಅಳಿಸಿ ಹೋಗದೆ ಇರುವ ಹಾಗೆ ಹಚ್ಚೆ ಹಾಕಿಬಿಟ್ಟಿದ್ದಿನಿ ಕಣೆ.

ನಿನ್ನ ಮನಸ್ಸಿನಲ್ಲಿ ನನ್ನ ಬಗ್ಗೆ ಯಾವ ಭಾವನೆ ಇದೆಯೋ ನನಗೆ ಗೋತ್ತಿಲ್ಲ ಕಣೇ. ಎಲ್ಲಾ ಹುಡುಗಿಯರಿಗು ನನ್ನ ಕೈ ಹಿಡಿಯುವವನು ಇ ತರಹ ಇರಬೇಕು ಆ ತರಹ ಇರಬೇಕು ಅಂತ ಕಲ್ಪನೆಗಳು ಇರುತ್ತವೆ. ಆ ನಿನ್ನ ಕಲ್ಪನೆಗಳಿಗೆ ನಾನು ಸರಿಹೊಗ್ತಿನೋ ಇಲ್ವೊ ಗೊತ್ತಿಲ್ಲ ಆದರೂ ನನ್ನ ಮನಸ್ಸು ಹೇಳ್ತಾ ಇದೆ ನಿನಗೊ ನನ್ನ ಕಂಡರೆ ಇಷ್ಟ ಅಂತ.

ಇಷ್ಟೊಂದು ಎಲ್ಲ ಹೇಳದೆ ನೇರವಾಗಿ ನೀನ್ನ ಮುಂದೆ ಬಂದು ನಿಂತು I LOVE YOU ಅಂತ ಹೇಳಬಹುದಿತ್ತು ಆದರೆ ಯಾಕೋ ಏನೋ ನೇರವಾಗಿ ನಿನ್ನ ಮುಂದೆ ಬಂದು ನಿಂತು ಆ ಮೂರು ಪದಗಳನ್ನ ಹೇಳುವುದಕ್ಕೆ ತುಂಬಾ ಭಯ ಅನಿಸುತ್ತಿತ್ತು ಅದಕ್ಕೆ ಈ ಪ್ರಯತ್ನ ಮಾಡ್ತಾಇದ್ದಿನಿ ಕಣೆ. ನಿನಗೆನಾದರು ನಾನು ಇಷ್ಟ ಆದರೆ ಹೇಳು

-:I AM WAITING :-

ಆದರೆ ಒಂದು ವಿಷಯ ನಿನಗೇನಾದರು ನನ್ನ ಮೇಲೆ ಮನಸ್ಸಿಲ್ಲಾ ಅಂದ್ರೆ ನೇರವಾಗಿ ಹೇಳಿ ಬಿಡು ನನಗೇನು ಬೇಜಾರಿಲ್ಲಾ ಕಣೇ ಆದರೆ ನನ್ನ ನಿನ್ನ ಸ್ನೇಹ ಮಾತ್ರ ಕೊನೆ ತನಕ ಹಾಗೆ ಮುಂದುವರಿಯಬೇಕು ಅಂತ ಬಯಸ್ತೀನಿ ಕಣೇ ಮತ್ತೆ ಯಾವತ್ತು ನಾನು ನಿನ್ನ ಹಿಂದೆ ಬಿದ್ದು ಪ್ರೀತ್ಸೆ ಪ್ರೀತ್ಸೆ ಅಂತ ಕಾಡೋದು ಇಲ್ಲಾ, ಯಾಕೆ ಅಂದ್ರೆ ಪೋಲಿ ನಾನಲ್ಲ. ನಿನ್ನ ಇಷ್ಟಾನೆ ನನ್ನ ಇಷ್ಟ ಅದಕ್ಕೆ.

Wednesday, January 20, 2010

ಹೇಳಲಾಗದೆ ಹೋದೆ

ನಿನ್ನ ಬಳಿ ನನ್ನ ಮನಸ್ಸಿನಲ್ಲಿರುವ ನಿನ್ನ ಮೇಲಿನ ಪ್ರಿತಿಯನ್ನ ಹೇಳಲೆ ಅಥವಾ ಬೇಡವೊ
ಒಂದು ಅರಿಯಾದಾದೆನಲ್ಲೆ ನನ್ನ ನಲ್ಲೆ
ಹೇಳಿದರೆ ಎಲ್ಲಿ ನನ್ನವರೆಲ್ಲಾ ನನ್ನಿಂದ ದೊರವಾಗುವರೆಂಬ ದುಗುಢ ನನ್ನಲ್ಲೆ
ಹೇಳದೆ ಹೋದರೆ ನಲ್ಲೆ ನಿ ನನಗೆ ಸಿಗದೆ ದೊರಾವಾಗುವೆಯಲ್ಲೆ
ಕೊನೆಗು ನಾ ಹೇಳದೆ ಹೋದರೆ ನಲ್ಲೆ
ನನಗೇನು ಬೇಸರವಿಲ್ಲೆ
ನೀನು ಬಿಟ್ಟು ಹೋದೆಯಲ್ಲ ನಲ್ಲೆ
ಆ ಸುಮಧುರ ಕ್ಷಣಗಳ ನೆನಪುಗಳ ಬುತ್ತಿಯನ್ನು ನನ್ನ ಮನಸ್ಸಿನಲ್ಲೆ
ಅಷ್ಟು ಸಾಕೆ ನಲ್ಲೆ ನನಗೆ ಈ ಜನುಮಕೆ
ಅದರಲ್ಲೆ ನಾ ತೃಪ್ತಿ ಪಡೆವೆನು ನಲ್ಲೆ ಓ ನನ್ನ ನಲ್ಲೆ

Thursday, January 14, 2010

ಸಂಕ್ರಾಂತಿ ಮಕರಸಂಕ್ರಾಂತಿ

ನಾವು ಉತ್ಸವ ಪ್ರಿಯರು. ನಾವು ಆಚರಿಸುವ ಹಬ್ಬ, ಹರಿದನಗಳನು್ನ ತೆರು-ಜಾತ್ರೆಗಳನು್ನ ಪ್ರಪಂಚದ ಯಾವ ರಾಷ್ಟ್ರಿಯ ಜನರು ಆಚರಿಸುವುದಿಲ್ಲ. ಯಾಂತ್ರಿಕ ಬದುಕಿನ ನಡುವೆ ಹಬ್ಬಗಳು ಬದುಕನ್ನು ಹಸನಾಗಿಸುವಲ್ಲಿ,ಕುಟುಂಬದಲ್ಲಿ ನೆಮ್ಮದಿ,ಲವಲವಿಕೆ, ಸಂತೋಷವನ್ನು ಉಂಟುಮಾಡಲು ನೆರವಾಗುತ್ತವೆ. ಅಂತ ಕೆಲವು ಹಬ್ಬಗಲ್ಲಿ ನಮ್ಮ ಮಕರ ಸಂಕ್ರಾಂತಿಯು ಒಂದು.

ಜಗತ್ತಿಗೆ ಬೆಳಕನ್ನು ಕೊಡುವ ಸೊರ್ಯ ತನ್ನ ಪಥ ಬದಲಾವಣೆ ಮಾಡುವ ಅಂದರೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ಈ ದಿನವನ್ನು ಸಂಕ್ರಮಣ ಎಂದು ಮಕರ ರಾಶಿಯನ್ನು ಪ್ರವೇಶಿಸುವುದರಿಂದ ಮಕರ ಸಂಕ್ರಮಣ ಎಂದು ಕರೆಯುವರು.

ಈ ಸಂಕ್ರಾಂತಿ ಹಬ್ಬವನ್ನು ಸುಗ್ಗಿ ಹಬ್ಬ ಅಂತನು ಕರೆಯುತ್ತೆವೆ.ಯುಗಾದಿ ಬೆವು-ಬೆಲ್ಲದ ಹಬ್ಬವಾದರೆ ಸಂಕ್ರಾಂತಿ ಎಳ್ಳು- ಬೆಲ್ಲದ ಹಬ್ಬ .ಸಂಕ್ರಾಂತಿಯ ದಿನದಂದು ಹೊಸದಾಗಿ ಬೆಳೆದ ಅಕ್ಕಿಯಲ್ಲಿ ಹುಗ್ಗಿಯನ್ನು ಮಾಡುತ್ತಾರೆ .ಆ ಹುಗ್ಗಿಯನ್ನು ನಾವು ಪೊಂಗಲ್ ಅಂತ ಕರೆಯುತ್ತೆವೆ. ಪೊಂಗಲ್ ಅಂದರೆ ಹುಕ್ಕುವುದು ಎಂದು ಅರ್ಥ.ಜೀವನದಲ್ಲಿ ಕಷ್ಟ ದೊರವಾಗಿ ಸುಖ ಉಕ್ಕಲಿ ಎಂಬುದು ಇದರ ಉದ್ದೇಶ.ಈ ಹಬ್ಬವನ್ನು ನಾವು ವಿಶೇಷಾವಾಗಿ ರೈತರ ಹಬ್ಬವಂತನೆ ಹೇಳಬಹುದು ಯಾಕೆ ಅಂದರೆ ರೈತರು ಸಂಕ್ರಾಂತಿಯ ದಿನ ತಮಗೆ ವರ್ಷವಿಡೀ ಧನ, ಧಾನ್ಯ, ಅಭಿವೃದ್ಧಿಯನ್ನು ಮಾಡಿದ ಸೂರ್ಯನಿಗೆ ಮತ್ತು ಭೂಮಿಗೆ ಹಾಗೂ ವ್ಯವಸಾಯದಲ್ಲಿ ಸಹಾಯಕವಾಗಿ ನಿಂತು ನೆರವು ನೀಡಿದ ದನಕರುಗಳಿಗೆ ಗೌರವ ನೀಡುವ ಹಬ್ಬ.ರೈತರು ತಮ್ಮ ತಮ್ಮ ದನ ಕರುಗಳಿಗೆ ಮೈ ತೊಳೆದು ವಿಶೆಷವಾಗಿ ಅಲಿಂಕರಿಸಿ ಕೆೋಡುಗಳಿಗೆ ಬಗೆ ಬಗೆಯ ಬಣ್ಣ ಹಚ್ಚುತ್ತಾರೆ. ಸಂಜೆ ಊರ ಬಾಗಿಲಲ್ಲಿ ಒಂದಷ್ಟು ಬೆಂಕಿ ಹಾಕಿ ತಮ್ಮ ತಮ್ಮ ದನ ಕರುಗಳನ್ನು ಒಡಿಸಿಕೊಂಡು ಬಂದು ಆ ಬೆಂಕಿಯಲ್ಲಿ ದಾಟಿಸಿ ಸಂಭ್ರಮ ಪಡುತ್ತಾರೆ. ಬಡವ ಬಲ್ಲಿದ, ಜಾತಿ ಭೇದಗಳೆಂಬ ಭೇದವಿಲ್ಲದೆ ಎಲ್ಲರು ಏಳ್ಳು ಬೆಲ್ಲ,ಕೊಬ್ಬರಿ,ಕಡಲೆಕಾಯಿಬೀಜ ಎಲ್ಲಾವನ್ನು ಸೇರಿಸಿ "ಎಳ್ಳು ಬೆಲ್ಲ ಸವಿಯೋಣ ಒಳ್ಳೆಯ ಮಾತನಾಡೋಣ" ಎನ್ನುತ್ತಾ ಎಳ್ಳು ಬೆಲ್ಲವನ್ನು ನೆರೆ ಹೊರೆಯವರೊಡನೆ ಬಂದುಗಳ ಜೊತೆಯಲ್ಲಿ ಹಂಚಿಕೊಂಡು ಸಂತಸ ಪಡುತ್ತಾರೆ.



ಎಳ್ಳು ಬೆಲ್ಲ ಸವಿಯುತ್ತಾ
ಕಬ್ಬಿನ ಸಿಹಿ ಹಿರುತ್ತಾ
ದ್ವೆಷ ಹಗೆಯನ್ನು ಮರೆಯುತ್ತಾ
ಸವಿ ಮಾತುಗಳನ್ನಾಡುತ್ತಾ
ಸಂಕ್ರಾಂತಿ ಹಬ್ಬವನ್ನು ಆಚರಿಸೋಣ.